Thursday, April 18, 2013

ಬಿ.ಶ್ರೀರಾಮುಲು ಬಗ್ಗೆ ಜನತೆಯಲ್ಲಿ ಒಲವಿದೆ- ನೆಕ್ಕುಂಟಿ ನಾಗರಾಜ

 ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಬಿ. ಶ್ರೀರಾಮುಲುರವರ ಜನಪರ ಕಾರ್ಯಕ್ರಮಗಳನ್ನು ನೀಡಿ ರಾಜ್ಯದ ಜನತೆಯ ಮನಸ್ಸು ಗೆದ್ದಿದ್ದಾರೆ. ಇವರು ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷ ಸ್ಥಾಪಿಸಿ ರಾಜ್ಯದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸುವುದು ಖಚಿತ, ಬಿ.ಶ್ರೀರಾಮುಲು ಬಗ್ಗೆ ಜನತೆಯಲ್ಲಿ ಒಲವಿದೆ ಎಂದು ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಬಿ.ಎಸ್.ಆರ್. ಕಾಂಗ್ರೆಸ್ ಅಭ್ಯರ್ಥಿ ನೆಕ್ಕುಂಟಿ ನಾಗರಾಜ ಹೇಳಿದರು. 
ಅವರು ಬುಧವಾರದಂದು ತಾಲೂಕಿನ ಅಳವಂಡಿ, ನೆಲೋಗಿಪುರ, ಕವಲೂರು, ಗುಡಗೇರಿ, ಮುರಲಾಪುರ, ಗಟರಡ್ಡಿಹಾಳ, ಬೆಳಗಟ್ಟಿ, ರಘುನಾಥನಹಳ್ಳಿ, ಕೇಸಲಾಪುರ, ಹಲವಾಗಲಿ, ಕಂಪ್ಲಿ, ಭೈರಾಪುರ ಗ್ರಾಮಗಳಲ್ಲಿ ಮುಖಂಡರನ್ನು ಪಕ್ಷದ ಕಾರ್ಯಕರ್ತರನ್ನು ಭೇಟಿಮಾಡಿ ಮಾತನಾಡಿದರು.
ರಾಜ್ಯದ ಜನತೆಯಲ್ಲಿ ಪ್ರಾದೇಶಿಕ ಪಕ್ಷಗಳ ಬಗ್ಗೆ ಒಲವಿದ್ದು ಈ ಬಾರಿ ಬಿ.ಶ್ರೀರಾಮುಲವರ ನೇತೃತ್ವದ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷ ಅಧಿಕ ಸ್ಥಾನಗಳನ್ನು ಗಳಿಸುವದರಲ್ಲಿ ಯಾವುದೇ ಸಂದೇಹವಿಲ್ಲ, ಈಗಾಗಲೇ ಉತ್ತರಕ್ಕಾಗಿ ಉಪವಾಸ, ತುಂಗಭದ್ರ ಹೂಳು ಎತ್ತಲು ಉಪವಾಸ, ಬರ ನಿರ್ವಹಣೆಗೆ ಬಸವಕಲ್ಯಾಣದಿಂದ ಬೆಂಗಳೂರಿನವರೆಗೆ ಪಾದ ಯಾತ್ರೆ ಕೈಗೊಂಡು ರಾಜ್ಯ ಜನತೆಯನ್ನು ಗೆದ್ದಿದ್ದಾರೆ ಈ ಬಾರಿ ರಾಜ್ಯದ ಜನತೆ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷವನ್ನು ಆರ್ಶಿವದಿಸಿ ಮತ ನೀಡುವರು ಎಂದರು.
ಈ ಸಂದರ್ಭದಲ್ಲಿ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಪ್ರಭುಗೌಡ ಪಾಟೀಲ್, ಪಕ್ಷದ ಮುಖಂಡರಾದ ಬಿ.ಶ್ರೀನಿವಾಸ್, ರಾಮಲಿಂಗ, ಪಕೀರಪ್ಪ, ಮಹ್ಮದ ಸಾಬ, ಪಿ.ಸುರೇಶ, ಪಣಿಕುಮಾರ, ತಿಮ್ಮಪ್ಪ, ಸೇರಿದಂತೆ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.


No comments:

Post a Comment