Thursday, April 18, 2013

ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ನೆಕ್ಕಂಟಿ ಬಿರುಸಿನ ಪ್ರಚಾರ


 ಬಿಎಸ್‌ಆರ್ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ನಾಗರಾಜ ನೆಕ್ಕಂಟಿ ತಾಲೂಕಿನ ವಿವಿದ ಗ್ರಾಮಗಳಲ್ಲಿ ಮತಯಾಚನೆ ಮಾಡುವ ಮೂಲಕ ಬಿಎಸ್‌ಆರ್ ಕಾಂಗ್ರೆಸ್‌ನ್ನು ಹೆಚ್ಚಿನ ಬಹುಮತ ನೀಡಿ ಆರಿಸಿ ತರುವಂತೆ ಮತದಾರರಲ್ಲಿ ಮನವಿ ಮಾಡಿದರು.
ಏ. ೪ ರಂದು ಅಳವಂಡಿ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಮೋರನಾಳ, ಬೆಟಗೇರಿ, ಹನಕುಂಟಿಕುಂಟಿ, ಮತ್ತೂರು, ನೀರಲಗಿ, ಕಾತರಕಿ-ಗುಡ್ಲಾನೂರು, ಡೊಂಬರಹಳ್ಳಿ, ಬೂದಿಹಾಳ ಹಾಗೂ ಬಿಸರಹಳ್ಳಿ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಬಿ. ಶ್ರೀನಿವಾಸುಲು, ತಾಲೂಕ ಅಧ್ಯಕ್ಷ ಪ್ರಭುಗೌಡ, ಪಕ್ಷದ ಯುವ ನಾಯಕರಾದ ರಾಮು, ಫಣಿರಾಜ್, ರಾಮಲಿಂಗ, ಪಕೀರಪ್ಪ, ಮಹ್ಮದಸಾಬ, ಪಿ.ಸುರೇಶ, ತಿಮ್ಮಪ್ಪ, ಸೇರಿದಂತೆ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

No comments:

Post a Comment